Image

ಸಾಯುತ್ತಿರುವವರು

Food Travel

ನನ್ನ ದೇಶದ ರಾಜಧಾನಿಯಲಿ

ಇನ್ನೊಂದು ಬಲಿದಾನ

ಹಾಡು ಹಗಲಿನ ಹೊತ್ತು

ಮುಗುಧ ಹಸುಳೆಯೊಂದು

ಕೊನೆ ಉಸಿರೆಳೆದಿತ್ತು.


ಊರೆಲ್ಲ ಮೊಂಬತ್ತಿ ಬೆಳಕು

ಹರಿದು ನ್ಯಾಯ ಬೇಡಿ

ಬರುವರನೇಕ ಜನ

ನಿನ್ನೆ ಇಂದು ನಾಳೆ ಮೊನ್ನೆಯ

ಕಂದಮ್ಮಗಳ ಸಾವಿಗೆ

ನ್ಯಾಯವೇ ಮೌನ.


ಸಾಯುತಿರುವವರು ಆರಯ್ಯ?

ಹಸುಳೆಗಳೆ, ಹೆತ್ತವರೆ, ಗುರು

ವರ್ಯರೆ, ಸಂಸ್ಕಾರದ ಸೋಂಕಿ

ಲ್ಲದೆ ಮೆರೆವ ಕಟುಕರೆ?

ಅಲ್ಲ, ಮಾನಸಿಕ ಅಸ್ವಸ್ಥರೆಂದು

ಘೋಷಿಸಿ ಸುಮ್ಮನಿದ್ದು

ಬಿಡುವ ನ್ಯಾಯಪೀಠಗಳೆ?


ಬಿರುಕುಬಿಟ್ಟ ಮಾನವೀಯತೆ

ಯ ಕರಟಿಹೋದ ಮೌಲ್ಯಗಳ

ಮರೆತೇ ಹೋದ ಕಾಡಿನಲಿ

ಸೌದೆ, ಹುಲ್ಲು, ಕುರಿಕಾಯಲೂ

ಹೊರಗಡಿಇಡುವುದನೂ

ಅಪರಾಧವೆಂದು ಘೋಷಿಸಿ

ಬಿಡಿರಯ್ಯ.


ಮೌನರೋಧನದಲಿ ಸತ್ತು

ಬದುಕುವ ಅಮ್ಮಂದಿರ

ಅಳುವ ಅಡಗಿಸಿ ಬಿಸಿಯುಸಿರ

ದಬ್ಬುವ ಅಪ್ಪಂದಿರ

ಪಾಪದ ಹೊರೆಯ ಹೊತ್ತು

ತಿರುಗುವ ಭುವಿಯ

ಮತ್ತೊಮ್ಮೆ ಮಗದೊಮ್ಮೆ

ಸಾಯಿಸದಿರಿ.


- ಫೆಲ್ಸಿ ಲೋಬೊ

Categories: Food, Travel Tags: #manila, #asia

1 Comments

  • Image placeholder

    ಶೈಲಜಾ pidukoli

    Nov 30, 2020 23:29:44

    ವಾಸ್ತವ ಸತ್ಯವಿದೆ 👌

    Reply

Leave a comment